ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ..
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತವನ್ನು ಅರಿಯುವದು ಅವಶ್ಯಕ..
ಪಿ ಬಿ ಲಮಾಣಿ, ವಿಶ್ರಾಂತ ಮುಕ್ಯೋಪಾಧ್ಯಾಯರು ಕೆಎಸ್ಆರ್ ಪ್ರೌಢ ಶಾಲೆ..
ಬೆಳಗಾವಿ : ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯಲ್ಲಿ 79ನೇಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತೀ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ.
ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ್ದು ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯಾರಾದ ಬಿ ಪಿ ಲಮಾಣಿಯವರು. ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅಥಿತಿಗಳು ಸ್ವಾತಂತ್ರ್ಯದ ಪೂರ್ವ ಹಾಗೂ ಸ್ವಾತಂತ್ರದ ನಂತರ ಬದಲಾವಣೆಯಾದ ಭಾರತದ ಚಿತ್ರಣದ ಬಗ್ಗೆ ವಿವರವಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಇತಿಹಾಸ, ಸ್ವತಂತ್ರ ಹೋರಾಟ, ಮಹಾನಾಯಕರ ತ್ಯಾಗ ಬಲಿದಾನ, ಸೋಲು ಗೆಲುವುಗಳ ಬಗ್ಗೆ ತಿಳಿದುಕೊಳ್ಳಬೇಕು, ಇತಿಹಾಸ ಅರಿತವನೇ ಭವಿಷ್ಯದಲ್ಲಿ ಯಶಸ್ವಿ ಆಗುವನು, ಆದಕಾರಣ ನಮ್ಮ ದೇಶ ಯಾವ ಸ್ಥಿತಿಯಲ್ಲಿ ಸ್ವಾತಂತ್ರ್ಯ ಪಡೆಯಿತು, ಆಗಿನ ಸಮಸ್ಯೆ ಸವಾಲುಗಳು ಏನಿದ್ದವು, ಅದಾದ ನಂತರ ಇಲ್ಲಿವರೆಗೆ ಹೇಗೆ ಅಭಿವೃದ್ಧಿ ಹೊಂದುತ್ತ ಬಂದಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ವಿದ್ಯಾರ್ಥಿಗಳು ಛದ್ಮವೇಷದ ಪ್ರದರ್ಶನಗಳನ್ನು ನೀಡಿದರು, ಅದರಲ್ಲಿ ಕಿತ್ತೂರರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೇಷಧಾರಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವತಂತ್ರ ಯೋಧರಾದ ಗವಿಸಿದ್ದಪ್ಪ ಬೆಳವಡಿಯವರ ಮೂರ್ತಿಗೆ ಪೂಜೆಯನ್ನು ಸಲ್ಲಿಸುವ ಮುಖಾಂತರ ಎಲ್ಲಾ ಕಾರ್ಯಕ್ರಮಗಳು ಪ್ರಾರಂಭವಾದವು.

ಶಾಲೆಯ ಮುಖ್ಯೋಪಾಧ್ಯಾಯರಾದ ಬಿ ಎಂ ಮಠ ಸಂಸ್ಥೆಯ ಚೇರ್ಮನರಾದ ಆರ್ ಪಿ ಪಮ್ಮಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಿ ಎಂ ಸುಣಗಾರ್ ಹಾಗೂ ಭೋದಕ ಬೋಧ ಕೇತರ ಸಿಬ್ಬಂದಿ ವರ್ಗದವರು ಪ್ರೌಢಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿದವರು ಶಾಲೆಯ ಮುದ್ದು ಮಕ್ಕಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು