ನಾಡಿನುದ್ದಕ್ಕೂ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಿರುವ ವಾಲ್ಮೀಕಿ ಯುವ ಸಂಘಟನೆ..
ಖಾನಾಪುರ ತಾಲ್ಲೂಕಿನಲ್ಲಿ ವಾಲ್ಮೀಕಿ ಸಮುದಾಯದ ಯುವ ಸಂಘಟನೆಯ ಉದ್ಘಾಟನೆ..
ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ..
ಮಹೇಶ ಎಸ್ ಶಿಗಿಹಳ್ಳಿ, ರಾಜ್ಯಾಧ್ಯಕ್ಷರು ಕಪಪಂ ವಾರಾಯುಘ..
ಖಾನಾಪುರ : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಬೆಳಗಾವಿ ಜಿಲ್ಲೆಯ, ಖಾನಾಪುರ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಮತ್ತು ಮುಖ್ಯ ಸಭೆ ಖಾನಾಪುರನಲ್ಲಿ ನಡೆಸಲಾಯಿತು, ಸಂಘಟನೆಯ ರಾಜ್ಯಾಧ್ಯಕ್ಷರಾದ ಮಹೇಶ ಎಸ್ ಶಿಗೀಹಳ್ಳಿರವರ ನೇತೃತ್ವದಲ್ಲಿ ಈ ಸಭೆ ಜರುಗಿದೆ..

ಈ ಸಭೆಯಲ್ಲಿ ಖಾನಾಪುರ ತಾಲೂಕಿನ ಗೌರವ ಅಧ್ಯಕ್ಷರಾಗಿ ರಾಜು ನಾಯಕ, ಖಾನಾಪುರ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ನಾಯಕ, ಅದೇರೀತಿ ಖಾನಾಪುರ ನಗರ ಅದ್ಯಕ್ಷರಾಗಿ ರುದ್ರಪ್ಪ ಮುಕಾರಿ, ಉಪಾಧ್ಯಕ್ಷರಾಗಿ ಸುನಿಲ್ ಬಾಳನ್ನವರ, ಖಾನಾಪುರ ತಾಲೂಕು ಸಹ ಕಾರ್ಯದರ್ಶಿಯಾಗಿ ಆದಿತ್ಯ ಹುಡೆದಾರ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷರಾದ ಮಹೇಶ್ ಸಿಗಿಹಳ್ಳಿ ಅವರು, ಸಂಘಟನೆಯ ತತ್ವ ಸಿದ್ಧಾಂತಗಳು ನಿಯಮಗಳ ಅಡಿಯಲ್ಲಿ ನಿಸ್ವಾರ್ಥದಿಂದ ನ್ಯಾಯಕ್ಕಾಗಿ ಹೋರಾಟ ಮಾಡಲು ಪದಾಧಿಕಾರಿಗಳು ಸಿದ್ಧರಾಗಬೇಕು ಹಾಗೂ ಕಾನೂನು ಕಾಯ್ದೆಗಳನ್ನು ತಿಳಿದುಕೊಳ್ಳಬೇಕು ಮತ್ತು ಯಾವುದೇ ಸ್ಥಳೀಯ ಸಮಸ್ಯೆಗಳು, ಅನ್ಯಾಯಗಳು ಕಂಡಾಗ ಪದಾಧಿಕಾರಿಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಮತ್ತು ಪದಾಧಿಕಾರಿಗಳು ಶಿಸ್ತನ್ನು ಕಾಪಾಡಿಕೊಳ್ಳಬೇಕು ಪ್ರತಿ ಗ್ರಾಮಗಳಲ್ಲಿ ಸಂಘಟನೆ ರಚನೆ ಮಾಡಿ ಮಕ್ಕಳಿಗೆ ಶಿಕ್ಷಣ ಹಾಗೂ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಹಾಗೂ ಪ್ರತಿ ಒಂದು ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದು ಹೊಸ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಇನ್ನೂ ಅನೇಕ ವಿಚಾರಗಳನ್ನು ಖಾನಾಪುರ ನೂತನ ಪದಾಧಿಕಾರಿಗಳಿಗೆ ಮತ್ತು ಯುವಕರಿಗೆ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ತಿಳಿಸಿದ್ದು, ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರವೀಣ್ ಮಾದರರವರು ಸಂಘಟನೆಯ ಮುಖ್ಯ ಅಂಶಗಳನ್ನು ಪದಾಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಬದಲ್ಲಿ ಬೆಳಗಾವಿ ಜಿಲ್ಲೆಯ ಗೌರವ ಅಧ್ಯಕ್ಷರು ರಾಮ್ ಪೂಜಾರಿ,
ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಲಗಮಣ್ಣ ಹೋನ್ನಂಗಿ,
ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಸಿತಿಮನಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಬೆಳಗಾವಿ ತಾಲೂಕು ಉಪಾಧ್ಯಕ್ಷರು ಶಕ್ತಿ ಕುಮಾರ ಪಿ ಎಸ್, ಖಾನಾಪುರ ತಾಲೂಕ ಅಧ್ಯಕ್ಷರು ಆನಂದ್ ಊದಿ, ಖಾನಾಪುರ ತಾಲೂಕು ನಗರ ಸೇವಕ ಹನುಮಂತ ಪೂಜಾರಿ,
ಸ್ಥಳೀಯ ಯುವ ಮುಖಂಡ ಕುಬೇರ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..