ಬಸವ ಕಾರ್ಯಕ ಜೀವಿಗಳ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ ಮತ್ತು ವೃಕ್ಷಾಭಿಯಾನ..
ಬೆಳಗಾವಿ : ಶಹಾಪುರ ಹಿಂದವಾಡಿ ನಗರದ ಲಿಂಗಾಯತ ಸ್ಮಶಾನದಲ್ಲಿ ಬಸವ ಕಾರ್ಯಕ ಜೀವಿಗಳ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ ಹಾಗೂ ವೃಕ್ಷಾಭಿಯಾನವನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶರಣೆ ರತ್ನಪ್ರಭಾ ಬೆಲ್ಲದ ಸಸಿ ನೆಡುವ ಮೂಲಕ ವೃಕ್ಷಾ ಅಭಿಯಾನಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷರು, ಸೂರ್ಯಕಾಂತ ಭಾವಿ, ದಾನಮ್ಮಾ ದೇವಿ ಟ್ರಸ್ಟ್ ಅಧ್ಯಕ್ಷರು ಚಂದ್ರಶೇಖರ ಬೆಂಬಳಗಿ, ಚನ್ನಬಸವ ಫೌಂಡೇಶನ್ ಸಂಸ್ಥಾಪಕರು ಶಂಕರ್ ಗುಡಸ್, ರಾಷ್ಟ್ರೀಯ ಬಸವದಳ ಅಧ್ಯಕ್ಷರು ಅಶೋಕ್ ಬೆಂಡಿಗೇರಿ, ಸುರೇಶ್ ಫೌಂಡೇಶನ್ ಸದಸ್ಯರು, ಬಸವ ಕಾಯಕ ಜೀವಿಗಳ ಸಂಘದ ನಿರ್ದೇಶಕರು ಕೆ. ಶರಣ ಪ್ರಸಾದ್, ಆನಂದ ಗುಡಸ್, ರಮೇಶ್ ಭೈರಾಜಿ ಮಹಾಂತೇಶ ಗುಡಸ್, ವೀರೇಶ್ ಉಳವಿ, ಬಸವರಾಜ ಗುಡಸ್, ನಿತಿನ್ ಗುಡಸ್, ಕುಮಾರ್ ಗೊಡಿಯಾಳ ಸಂತೋಷ್ ಗುಡಸ್, ಬಸವರಾಜ ಹಂಪಣ್ಣವರ, ಶಿವಲಿಂಗ ದಿವಟಗಿ, ಕಾರ್ಯಕರ್ತರು ಮಲ್ಲಿಕಾರ್ಜುನ ಆಡಿನ್, ಮಲ್ಲಿಕಾರ್ಜುನ್ ಬಾಬಾನಗರ, ವಿಜಯ ಲಿಂಗಾಯತ ಸೋಮಲಿಂಗಪ್ಪ ಮದ್ನಳ್ಳಿ ನೀಲಾ ಗಂಗಾ ಪಾಟೀಲ, ಸುಶಿಲಾ ಲಿಂಗಾಯತ, ಶೀಲಾ ಗುಡಸ್, ಮಹಾದೇವಿ ಗುಡಸ್, ಕೆ. ರೂಪಾಶರಣ, ಪ್ರಸಾದ್ ಸ್ವಾತಿ ಗೋಡಿಯಾಳ, ನಿರ್ಮಲ ಮೂಗಬಸ್ತಿ ಹಾಗೂ ಸಮಾಜದ ಮುಖಂಡರು, ಬಸವ ಕಾಯಕ ಜೀವಿಗಳ ಸಂಘದ ಸದಸ್ಯರು ಮತ್ತು ಶರಣೆಯರು ಭಾಗವಹಿಸಿ ಸಮಾಜ ಸೇವೆಯ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, “ಸ್ಮಶಾನ ಸ್ವಚ್ಛತೆ ಮತ್ತು ವೃಕ್ಷಾರೋಪಣೆಯ ಮೂಲಕ ಸಮಾಜಕ್ಕೆ ಆರೋಗ್ಯಕರ ಹಾಗೂ ಹಸಿರು ವಾತಾವರಣವನ್ನು ಒದಗಿಸಬಹುದು. ಬಸವ ತತ್ತ್ವದ ಅನುಸರಣೆ ಮೂಲಕ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದು ಎಲ್ಲರ ಹೊಣೆಗಾರಿಕೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವಶಂಕರಯ್ಯ ಅಲ್ಲಯ್ಯನವರ ಮಠ, ಎಂ ಎಂ ಸತ್ತಿಗೇರಿ, ಕೆಂಪಣ್ಣ ರಾಮಪುರಿ, ಶಿವಪ್ಪ ಕಾದ್ರೋಲಿ, ಈರಣ್ಣ ಭೊಮ್ಮಣ್ಣವರ್ ಮಹೇಶ್ ಶಿಗಿಹಳ್ಳಿ ಶ್ಯಾಮ್ ಗೌಡರ್ ಮತ್ತಿತರರು ಉಪಸ್ಥಿತರಿದ್ದರು..