ಯಾವುದೇ ಗೊಂದಲವಿಲ್ಲದೆ ಪಾರದರ್ಶಕವಾಗಿ ಮತಎಣಿಕೆಗೆ ಸಿದ್ಧತೆ..
ಮತ ಎಣಿಕಾ ಕೇಂದ್ರದಿಂದ 200 ಮೀಟರವರೆಗೆ ನಿಷೇದಾಜ್ಞೆ..
ಚುನಾವಣಾಧಿಕಾರಿಗಳಾದ ನಿತೇಶ್ ಪಾಟೀಲ್ ಹೇಳಿಕೆ..
ಬೆಳಗಾವಿ : ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿ ಲೋಕಸಭೆ ಚುನಾವಣೆಯ ಮತ ಏಣಿಕೆಗೆ ಒಳ್ಳೆಯ ತಯಾರಿ ಮಾಡಿಕೊಂಡಿದ್ದೇವೆ. ಯಾವುದೇ ಗೊಂದಲ ಇಲ್ಲದೇ ಪಾರದರ್ಶಕವಾಗಿ ಮತ ಏಣಿಕೆ ಪೂರ್ಣಗೊಳಿಸಿ ಫಲಿತಾಂಶವನ್ನು ನೀಡುತ್ತೇವೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಮತ ಏಣಿಕೆ ನಡೆಯಲಿರುವ ಬೆಳಗಾವಿ ನಗರದ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಬೆಳಿಗ್ಗೆ 6 ಗಂಟೆಗೆ ಮತಪೆಟ್ಟಿಗೆ ಇರುವ ಭದ್ರತಾ ಸ್ಟ್ರಾಂಗ್ ರೂಮಗಳನ್ನು ಅಭ್ಯರ್ಥಿಗಳು, ಏಜೆಂಟ್ ಗಳು, ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ತೆರೆಯುತ್ತವೆ.
ಒಟ್ಟು 17 ರೂಮಗಳು, 8 ವಿಧಾನಸಭೆ ಕ್ಷೇತ್ರಗಳು. 1 ರೂಮ್ ಪೋಸ್ಟಲ್ ಬ್ಯಾಲೇಟ್ ಮತಗಳನ್ನು ಇಡಲಾಗಿದೆ.
8 ಗಂಟೆಯಿಂದ ಮತ ಏಣಿಕೆ ಆರಂಭವಾಗುತ್ತದೆ. ಅಂದು ಜಿಲ್ಲೆಯಾಧ್ಯಂತ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಇರಲಿದ್ದು, ಕೇಂದ್ರದಲ್ಲಿ ಮೊಬೈಲ್, ತಂಬಾಕು, ಬೀಡಿ ಕೂಡ ನಿಷಿದ್ಧಗೊಳಿಸಿದ್ದೇವೆ ಎಂದು ಹೇಳಿದರು.

ಒಟ್ಟು ಮತಗಳು 19,23,788
13,75,283 ಮತದಾರರು ಮತ ಚಲಾಯಿಸಿದ್ದು. ಶೇ.71.49 ಮತದಾನ ದಾಖಲಾಗಿತ್ತು. ಈವರೆಗೆ 11,148 ಪೋಸ್ಟಲ್ ಬ್ಯಾಲೇಟ್ ಮತಗಳು ಬಂದಿದ್ದು, ಬೆಳಿಗ್ಗೆ 8 ಗಂಟೆವರೆಗೆ ಬಂದ ಪೋಸ್ಟಲ್ ಬ್ಯಾಲೇಟ್ ಮತಗಳನ್ನು ಪರಿಗಣಿಸಲಾಗುತ್ತದೆ. ಇನ್ನೂ 300 ಮತಗಳು ಹೆಚ್ಚಿಗೆ ಆಗಬಹುದು. ಇವಿಎಂ ಮತಗಳ ಏಣಿಕೆಗೆ 8 ಮತ ಏಣಿಕೆ ರೂಮ್ ಮಾಡಿಕೊಂಡಿದ್ದೇವೆ. ಪೋಸ್ಟಲ್ ಬ್ಯಾಲೇಟ್ ಮತಗಳ ಏಣಿಕೆಗೆ ಎರಡು ಹೆಚ್ಚುವರಿ ರೂಮ್ ಮಾಡಿಕೊಂಡಿದ್ದೇವೆ. ಚುನಾವಣೆ ಆಯೋಗದಿಂದ 18 ಟೇಬಲ್ ಹಾಕಲು ಅನುಮತಿ ಪಡೆದಿದ್ದೇವೆ. 14 ಟೇಬಲ್ ಗಳಲ್ಲಿ ಮತ ಏಣಿಕೆಗೆ ಅವಕಾಶವಿದೆ. 14+1 ಏಜೆಂಟಗಳಿಗೆ ಅವಕಾಶ ನೀಡಲಾಗುತ್ತದೆ. ಪೋಸ್ಟಲ್ ಬ್ಯಾಲೇಟ್ 18 ಟೇಬಲ್ ಗಳಿಗೆ 18 ಕೌಂಟಿಂಗ್ ಏಜೆಂಟ್ ಗಳಿಗೆ ಅವಕಾಶ ನೀಡಲಾಗಿದೆ. 552 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 30 ಆರ್.ಓ ಗಳು ಇರುತ್ತಾರೆ.
ತಾಂತ್ರಿಕ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗದಿಂದ 8 ಜನ ಇಂಜಿನಿಯರಗಳು ಆಗಮಿಸಿದ್ದಾರೆ. ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರತಿಕ್ಷಣದ ಮತ ಏಣಿಕೆ ಪ್ರಕಟಿಸಲಾಗುತ್ತದೆ. ಅಲ್ಲದೇ ನಗರದ ಆರ್.ಪಿ.ಡಿ. ಸರ್ಕಲ್ ನಲ್ಲಿ ಸಾರ್ವಜನಿಕರು ಫಲಿತಾಂಶ ವೀಕ್ಷಿಸಲು ಎಲ್ಇಡಿ ಅಳವಡಿಸಲಾಗುತ್ತದೆ ಎಂದು ನಿತೇಶ ಪಾಟೀಲ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಮತ ಏಣಿಕೆ ಕೇಂದ್ರ ಮತ್ತು ಬೆಳಗಾವಿ ನಗರದಲ್ಲಿ ಎರಡು ಹಂತದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಇಬ್ಬರು ಡಿಸಿಪಿ, ಹೊರಗಡೆ ಒಬ್ಬರು ಡಿಸಿಪಿ ಇರುತ್ತಾರೆ. 5 ಎಸಿಪಿಗಳು, 13 ಸಿಪಿಐ, 21 ಪಿಎಸ್ಐ, 463 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ 105 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲೆಲ್ಲಾ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುತ್ತೇವೆ. 5 ಕೆಎಸ್ ಆರ್ ಪಿ ತುಕಡಿಗಳು, 300 ಹೋಮ್ ಗಾರ್ಡ್ಸ್ ಬಳಕೆಗೆ ಅವಕಾಶ ಸಿಕ್ಕಿದೆ. 4 ಡ್ರೋನ್ ಕ್ಯಾಮರಾಗಳನ್ನು ಬಳಸುತ್ತೇವೆ. ನಗರದಲ್ಲಿ 300 ಸಿಸಿಟಿವಿಗಳನ್ನು ಅಳವಡಿಸುತ್ತಿದ್ದೇವೆ. ಈ ಬಾರಿ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ತೀವ್ರ ನಿಗಾ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಟಾಕಿ, ಗುಲಾಲು ತರದಂತೆ ಸೂಚನೆ ನೀಡಿದ್ದೇವೆ. 200 ಮೀಟರ್ ಅಂತರದಲ್ಲಿ ಯಾವುದೇ ರೀತಿ ವಿಜಯೋತ್ಸವ ಮಾಡುವಂತಿಲ್ಲ. ಇದು ಹೊರತು ಪಡಿಸಿ ಬೇರೆ ಸ್ಥಳದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ವಿಜಯೋತ್ಸವ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶ ಉಪಸ್ಥಿತರಿದ್ದು, ಇದಾದ ಬಳಿಕ ಮತ ಏಣಿಕೆ ಕೇಂದ್ರವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..