ಹಿರಿಯ ರಾಜಕಾರಿಣಿ ಶಾಮನೂರು ಶಿವಶಂಕರಪ್ಪ ಅವರಿಗೆ ಸನ್ಮಾನ..
ಬೆಳಗಾವಿಯ ಅಮ್ಮ ಪ್ರತಿಷ್ಠಾನದಿಂದ ಶುಭಹಾರೈಕೆಯ ಸನ್ಮಾನ..
ಬೆಳಗಾವಿ : ದಾವಣಗೆರೆ ನಗರದ ಉದ್ಯಮಿಗಳು, ಜನಪ್ರಿಯ ನಾಯಕರು, ಬಡವರ ಬಂಧು, ಹಿರಿಯ ಮುತ್ಸದ್ದಿಗಳು, ಸೋಲಿಲ್ಲದ ಸರದಾರರು, ಜನಪ್ರಿಯ ಶಾಸಕರು ಆದ ಶಾಮನೂರು ಶಿವಶಂಕರಪ್ಪ ಅವರಿಗೆ 95 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ದಿ. 04.07.2025 ರಂದು ದಾವಣಗೆರೆ ಪಟ್ಟಣದಲ್ಲಿ ಶುಭ ಕೋರಲಾಗಿದೆ.
ಬೆಳಗಾವಿ ನಗರದ ಕೃಷಿ ವ್ಯಾಪಾರಸ್ಥರು ಮತ್ತು ಅಮ್ಮ ಪ್ರತಿಷ್ಠಾನದ ಅಧ್ಯಕ್ಷರು ಆದಂತ ಬಾಳಾಸಾಹೇಬ ಕ ಉದಗಟ್ಟಿ ಹಾಗೂ ಅರವಿಂದಾಕ್ಷ ಕಾರ್ಯಕಾರಿ ಸದಸ್ಯರು ಅವರಿಂದ ಶ್ರೀಯುತರಿಗೆ ಅವರ ಜನ್ಮ ದಿನದ ನಿಮಿತ್ತ ಶುಭ ಕೋರಿ, ಅವರಿಗೆ ಮತ್ತಷ್ಟು ಆಯಸ್ಸು ಕೀರ್ತಿ ಯಶಸ್ಸು ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಬೆಳಗಾವಿಯ ಅಮ್ಮ ಪ್ರತಿಸ್ಥಾನದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..