ಹೊಸೂರು ರೈತರಿಗೆ 10.80 ಲಕ್ಷ ಪರಿಹಾರ ಘೋಷಿಸಿದ ಬೈಲಹೊಂಗಲ ನ್ಯಾಯಾಲಯ..

ಹೊಸೂರು ರೈತರಿಗೆ 10.80 ಲಕ್ಷ ಪರಿಹಾರ ಘೋಷಿಸಿದ ಬೈಲಹೊಂಗಲ ನ್ಯಾಯಾಲಯ..

ಆದೇಶವಾದ 30 ದಿನಗಳ ಒಳಗೆ ಬಡ್ಡಿಯೊಂದಿಗೆ ಪರಿಹಾರ ವಿತರಣೆಗೆ ಸೂಚನೆ..

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ರೈತ ಮಡಿವಾಳಪ್ಪ ಹೊಂಗಲ ಅವರ 2 ಏಕರೆ 31 ಗುಂಟೆ ಹಾಗೂ ಅಡಿವೆಪ್ಪ ಕರಡಿಗುದ್ದಿ ಅವರ 2 ಏಕರೆ 32 ಗುಂಟೆ ಜಮೀನಿನಲ್ಲಿ ಬೆಳದಿದ್ದ ಕಬ್ಬು ಬೆಳೆಗೆ ಫೇಬ್ರುವರಿ 3 2022 ರಂದು
ವಿದ್ಯುತ್ ಅವಘಡದಿಂದ ಸುಮಾರು 400ಟನ್ ಕಬ್ಬು ಬೆಳೆ ಸುಟ್ಟು ಕರಕಲಾಗಿತ್ತು.

ಈ ಬಗ್ಗೆ ಪರಿಹಾರ ಕೇಳಿ ಬೈಲಹೊಂಗಲ ನ್ಯಾಯಲಯದಲ್ಲಿ ರೈತರು ಹೆಸ್ಕಾಂ ವಿರುದ್ದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಆಲಿಸಿದ ನ್ಯಾಯಾಲಯ ಇಬ್ಬರು ರೈತರಿಗೆ 5 ಲಕ್ಷ 40 ಸಾವಿರ ರೂಪಾಯಿಯಂತೆ ಒಟ್ಟು 10ಲಕ್ಷ 80 ಸಾವಿರ ರೂಪಾಯಿ ಪರಿಹಾರ ಧನವನ್ನು 30 ದಿನದೊಳಗೆ ಶೇ6 ರಂತೆ ಬಡ್ಡಿ ಹಾಕಿ ಪರಿಹಾರ ವಿತರಿಸುವಂತೆ ಹೆಸ್ಕಾಂ ಇಲಾಖೆಗೆ ಬೈಲಹೊಂಗಲ ಹಿರಿಯ ಶ್ರೇಣಿ ನ್ಯಾಯಾಧೀಶರು ಶುಕ್ರವಾರ ನವೆಂಬರ್ 29 ದಂದು ಆದೇಶ ಮಾಡಿದ್ದಾರೆ.

ರೈತರ ಪರವಾಗಿ ನ್ಯಾಯವಾದಿ ಎಮ್.ಎಸ್. ಅಂದಾನಶೆಟ್ಟಿ ಮತ್ತು ಎಫ್.ಎಸ್.ಸಿದ್ದನಗೌಡರ ವಾದ ಮಂಡನೆ ಮಾಡಿದ್ದರು.