ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸಿದ್ದು ಬಿಜೆಪಿ ಸರ್ಕಾರ…

ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸಿದ್ದು ಬಿಜೆಪಿ ಸರ್ಕಾರ..

ಜಗತ್ತಿನ ಬಡರಾಷ್ಟ್ರಗಳಿಗೆ 220ಕೋಟಿ ಕರೋನಾ ವ್ಯಾಕ್ಸೀನ್ ನೀಡಿದ್ದು ಮೋದಿ ಸರ್ಕಾರ..

ಜಗತ್ತೇ ಹೆಮ್ಮೆ ಪಡುವಂತೆ G20 ಸಮಾವೇಶ ನಡೆಸಿದ್ದು ಬಿಜೆಪಿ ಸರ್ಕಾರ..

ನ್ಯಾಯವಾದಿ ಎಂ ಬಿ ಜಿರಲಿ..

ಬೆಳಗಾವಿ : ದೇಶದಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾ‌ನಿ ಆಗಬೇಕು, ಮೋದಿ ಆಡಳಿತದ ಹತ್ತು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆಗಿಲ್ಲ, ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅಭಿವೃದ್ಧಿಯಿಂದ ಇಂದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ದೆಹಲಿಯಲ್ಲಿ ಆಯೋಜನೆ ಮಾಡಿದ G20 ಸಮಾವೇಶ ಯಾವ ಅಭಿವೃದ್ಧಿ ಹೊಂದಿದ ದೇಶಗಳು ಮಾಡುವದಿಲ್ಲ, ಕರೋನಾ ಸಮಯದಲ್ಲಿ ದೇಶದ ಹಾಗೂ ವಿದೇಶದ ಜನರಿಗೆ ಭಾರತ ದೇಶ ಮಾಡಿದ ಸೇವೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಶ್ಲಾಘನೀಯ ಎಂದು ಬಿಜೆಪಿ ರಾಜ್ಯ ವಕ್ತಾರ, ನ್ಯಾಯವಾದಿಗಳಾದ ಎಂ ಬಿ ಜೀರಲಿ ಹೇಳಿದ್ದಾರೆ..

ಶುಕ್ರವಾರ ಬೆಳಗಾವಿ ಕೋರ್ಟ್ ಆವರಣದಲ್ಲಿ ಇರುವ ವಕೀಲರ ಸಂಘದ ಜೊತೆ ಆಯೋಜನೆ ಮಾಡಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಚುನಾಚಣೆಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, 40 ವರ್ಷಗಳ ರಾಜಕೀಯ ಅನುಭವ ಹೊಂದಿರುವ ರಾಜಕಾರಣಿ. ಬೆಳಗಾವಿ ಉಸ್ತುವಾರಿ ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ, ಕಳೆದ ಐದು ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ದಿ‌.‌ ಸುರೇಶ್ ಅಂಗಡಿಯವರಿಗೆ ಗೆಲ್ಲಿಸಿದ್ದೇವೆ ಜೊತೆಗೆ ಒಂದು ಬಾರಿ ಉಪಚುನಾವಣೆಯಲ್ಲಿ ಮಂಗಳಾ ಸುರೇಶ್ ಅಂಗಡಿ ಅವರನ್ನು ಗೆಲ್ಲಿಸಿದ್ದೇವೆ, ದಿ. ಸುರೇಶ ಅಂಗಡಿ ಅವರಿಗೆ ಲಕ್ಷಾಂತರ ಲೀಡ್ ನಿಂದ ಗೆಲ್ಲಿಸಿದ್ದೇವೆ. ಈ ಚುನಾಣೆಯಲ್ಲಿ ಕೂಡಾ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.‌

ರಾಜ್ಯದಲ್ಲಿಯೇ ಬೆಳಗಾವಿ ಬಾರ್ ಅಸೋಸೀಯೇಸ್ ತುಂಬಾ ಶಿಸ್ತಿನ ಸಂಘ ಆಗಿದೆ.‌ ದೇಶವನ್ನು ಸ್ವಾತಂತ್ರ್ಯ ಮಾಡಲು ಹೋರಾಟ ಮಾಡಿದರು ಒಬ್ಬ ವಕೀಲ.‌ ಜನರಿಗೆ ಅನ್ಯಾಯ ಆದಾಗ ಅವರಿಗೆ ನ್ಯಾಯ ಕೊಡಿಸುವವರು ಒಬ್ಬ ವಕೀಲ. ಒಬ್ಬ ವಕೀಲರಿಗೆ 3 ಸಾವಿರ ವೋಟ್ ಹಾಕಿಸುವ ಶಕ್ತಿ ಇದೆ. ಜನರು ವಕೀಲರ ಮೇಲೆ ತುಂಬಾ ನಂಬಿಕೆ ಇಡುತ್ತಾರೆ ಹಾಗಾಗಿ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಶ್ರಮೀಸಬೇಕು ಎಂದು ಕರೆ ನೀಡಿದರು.‌

ವರದಿ ಪ್ರಕಾಶ್ ಕುರಗುಂದ..