ಅಧಿಕಾರಿಗಳ ಹಾಗೂ ಜನಪ್ರತಿನಿಧಿನಗಳ ನಿರ್ಲಕ್ಷಕ್ಕೆ ಒಳಗಾದ ಜೈತನಮಾಳ ಗ್ರಾಮ..

ಅಧಿಕಾರಿಗಳ ಹಾಗೂ ಜನಪ್ರತಿನಿಧಿನಗಳ ನಿರ್ಲಕ್ಷಕ್ಕೆ ಒಳಗಾದ ಜೈತನಮಾಳ ಗ್ರಾಮ..

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸೌಲಭ್ಯವಂಚಿತ ಗ್ರಾಮ..

ಹಿಂದುಳಿದ ಬಡ ಜನರಿಗೆ ಮೂಲಭೂತ ಸೌಲಭ್ಯ ನೀಡದಿದ್ದರೆ ಹೋರಾಟ ನಿಶ್ಚಿತ..

ಮಹೇಶ ಎಸ್ ಶಿಗೀಹಳ್ಳಿ, ರಾಜ್ಯಧ್ಯಕ್ಷರು ಕರ್ನಾಟಕ ರಾಜ್ಯ ವಾಲ್ಮೀಕಿ ಯುವ ಘಟಕ..

ಬೆಳಗಾವಿ : ದಕ್ಷಿಣ ಮತಕ್ಷೇತ್ರದಲ್ಲಿ ಇರುವ ಪಿರಣವಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜೈತನಮಾಳ ಗ್ರಾಮದ ಕುಂದುಕೊರತೆಯ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಮಹೇಶ ಎಸ್ ಶಿಗೀಹಳ್ಳಿ ಅವರು ತಮ್ಮ ಅಸಮಾಧಾನದ ಮಾತುಗಳನ್ನಾಡಿದ್ದಾರೆ..

ಬಹುತೇಕ ಹಿಂದುಳಿದ ಸಮುದಾಯದ ಜನರಿರುವ ಈ ಗ್ರಾಮಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಸಂಬಂಧ ಪಟ್ಟ ಜನಪ್ರತಿನಿಧಿಗಳು ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ ಎಂಬ ಸಂಶಯ ಕಾಡುತ್ತಿದೆ, ಆದ ಕಾರಣ ಜೈತನಮಾಳ ಗ್ರಾಮವು ಅಬಿವೃದ್ಧಿ ಕಾಣದೆ ಹಿಂದುಳಿದಿದೆ, ಜೈತನಮಾಳಕ್ಕೆ ಸರಿಯಾದ ರಸ್ತೆ ಸಂಪರ್ಕ, ಬೀದಿ ದೀಪ ಮಕ್ಕಳಿಗೆ ಅಂಗನವಾಡಿ ಶಾಲೆ ಇಲ್ಲದೇ, ಕಡೆಗೆ ಇಲ್ಲಿಯ ನಿವಾಸಿಗಳು ಮರಣ ಹೊಂದಿದಾಗ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಕೂಡಾ ಇಲ್ಲದೆ, ಜನರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಅಬಿವೃದ್ಧಿ ಇರುವುದಿಲ್ಲ ಎಂದಿದ್ದಾರೆ..

ಈ ಗ್ರಾಮದಲ್ಲಿ ಶೇಕಡಾ 90% ಜನರು ಬಡವರು ಹಿಂದುಳಿದವರು, ಪ.ಜಾತಿ/ ಪ.ಪಂ ಸಮುದಾಯದವರಿದ್ದು ಇಲ್ಲಿಯ ಜನರಿಗೆ ಉತ್ತಮ ಗುಣಮಟ್ಟದ ಮನೆಗಳು ಇಲ್ಲ ಸರ್ಕಾರ ಕೊಡುವ ಸೌಲಭ್ಯಗಳು ದೊರೆಯುತ್ತಿಲ್ಲ. ಸಂತ್ರಸ್ತರು ಮನೆ ನವೀಕರಣಕ್ಕೆ ಅರ್ಜಿಗಳನ್ನು ಹಾಕಿದರು ಪರಿಗಣಿಸದೆ ಬೇಜವಾಬ್ದಾರಿ ವರ್ತನೆ ತೋರುತ್ತಿರುವವರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಂದಿದ್ದಾರೆ..

ಹೀಗಾದರೆ ಸಂವಿಧಾನದಲ್ಲಿ ಇರುವ ಅತ್ಯಮೂಲ್ಯವಾದ ಹಕ್ಕುಗಳನ್ನು ನಮ್ಮವರಿಂದ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ಎಂಬ ವಾತಾವರಣ ಸೃಷ್ಟಿಯಾಗಿದೆ ನಮ್ಮವರಿಗೆ ಸಿಗಬೇಕಾದ ಸೌಲಭ್ಯಗಳು ಯೋಜನೆಗಳು ಹಕ್ಕುಗಳು ಯಾವುದು ಸರಿಯಾಗಿ ಸಿಗುತ್ತಿಲ್ಲ ಇದರಿಂದ ಹಿಂದುಳಿದ ಸಮುದಾಯದ ಜನರಾದ ನಮ್ಮವರು ಮತ್ತಷ್ಟು ಹಿಂದೆ ಉಳಿಯುವಂತಾಗಿದೆ, ಇದಕ್ಕೆ ಕಾರಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಜನಪ್ರತಿನಿದಿಗಳು ಎಂಬ ಸಂಶಯ ಮೂಡುತ್ತದೆ ಎಂದಿದ್ದಾರೆ..

ಈ ಪರಸ್ಥಿತಿಯನ್ನು ವೀಕ್ಷಿಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಬರಬೇಕು ಸರಿಯಾದ ಸೂಕ್ತ ಕ್ರಮ ಕೈಗೊಂಡು ನಮ್ಮವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಸಂಬಂಧ ಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಅಲ್ಲಿಯ ಶಾಸಕರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಮಹೇಶ ಎಸ್ ಶಿಗಿಹಳ್ಳಿ (ರಾಜ್ಯಾಧ್ಯಕ್ಷರು) ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಎಚ್ಚರಿಕೆ ನೀಡಿದ್ದಾರೆ..