ಪಾಲಿಕೆಯ ಉಪ ಆಯುಕ್ತರಿಗೆ ಜನ್ಮದಿನದ ಶುಭ ಕೋರಿದ ಸಿಬ್ಬಂದಿಗಳು..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಉಪ ಆಯುಕ್ತರು (ಆಡಳಿತ) ಹಾಗೂ ಮಹಾನಗರ ಪಾಲಿಕೆಯ ಎಸ್ ಸಿ, ಎಸ್.ಟಿ ಸೌಕರರ ಸಂಘದ ಅಧ್ಯಕ್ಷರಾದ ಉದಯಕುಮಾರ ತಳವಾರ ಅವರ 48ನೇ ಜನ್ಮದಿನದ ನಿಮಿತ್ತವಾಗಿ ಕಂದಾಯ ವಿಭಾಗ ಹಾಗೂ ಡಾಟಾ ಎಂಟ್ರಿ ಆಪರೇಟರ್ ವಿಭಾಗದಿಂದ ಹೂಗುಚ್ಚ ಹಾಗೂ ಸ್ಮರಣಿಕೆ ನೀಡಿ ಶುಭಾಶಯಗಳನ್ನು ತಿಳಿಸಲಾಗಿದೆ..

ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಭಗವಂತ ತಮಗೆ ಮತ್ತಷ್ಟು ಆರೋಗ್ಯ ಅಂತಸ್ತು ನೀಡಿ ಕಾಪಾಡಲಿ, ವೃತ್ತಿಪರವಾಗಿ ತಾವು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು, ಎಂದಿನಂತೆ ಎಲ್ಲಾ ಸಿಬ್ಬಂದಿಗಳಿಗೂ ಮಾರ್ಗದರ್ಶನ ಮಾಡುತ್ತಾ, ಎದುರಿಗೇನೇ ನಮ್ಮ ತಪ್ಪನ್ನು ತಿಳಿಸಿ, ತಿದ್ದುತ್ತಿರುವ ತಾವು ನೂರು ಕಾಲ ಸುಖವಾಗಿ ಬಾಳಿ ಬದುಕಬೇಕು ಎಂದು ಶುಭ ಹಾರೈಸಿದ್ದಾರೆ.