ಮುಡಾ ಪ್ರಕರಣ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ..

ಮುಡಾ ಪ್ರಕರಣ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ..

ಜಾಗೃತ ವಕೀಲರ ವೇದಿಕೆ ಬೆಳಗಾವಿ.

ಸಾಮಾಜಿಕ ನ್ಯಾಯದ ಪರವಾಗಿ ಇರುವ ಸರ್ಕಾರಕ್ಕೆ ಕಿರುಕುಳ ನೀಡುವ ತಂತ್ರವಿದು..

ಬೆಳಗಾವಿ : ಸೋಮವಾರ ದಿನಾಂಕ 14/10/2024 ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಾಗೃತ ವಕೀಲರ ವೇದಿಕೆ ಬೆಳಗಾವಿಯ ಸದಸ್ಯರು ಮುಡಾ ಪ್ರಕರಣದ ಕುರಿತಾಗಿ ಮುಡಾ ಪ್ರಕರಣ ಕೋರ್ಟುಗಳ ಆದೇಶಗಳು : ಸತ್ಯಾ ಸತ್ಯತೆ” ಎಂಬ ಪುಸ್ತಕ ಬಿಡುಗಡೆ ಮಾಡಿ, ಮುಡಾ ಪ್ರಕರಣ ಆಡಳಿತದ ಸರ್ಕಾರವನ್ನು ಅಸ್ಥಿರಗೊಳಿಸುವ ಒಂದು ಪ್ರಯತ್ನ ಎಂದು ವ್ಯಾಖ್ಯಾನಿಸಿದ್ದಾರೆ..

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲರಾದ ಎನ್.ಆರ್. ಲಾತೂರ್ ಅವರು ಹಳೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಸ್ತುತ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ, ಮುಡಾ ಪ್ರಕರಣದಲ್ಲಿ ದೂರುದಾರರು ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ ಇದು ನ್ಯಾಯಾಲಯವನ್ನು ಮತ್ತು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಅದಕ್ಕಾಗಿ ಜನರಿಗೆ ನಿಜವಾದ ಸತ್ಯಾಸತ್ಯೆತೆ ತಿಳಿಯಲು ಕರ್ನಾಟಕ ಜಾಗೃತ ವಕೀಲರ ವೇದಿಕೆ ವತಿಯಿಂದ ಮೂಡಾ ಪ್ರಕರಣ ಕುರಿತಾಗಿ ಪುಸ್ತಕ ರೂಪದಲ್ಲಿ ಹೊರತರಲಾದ ಈ ಪುಸ್ತಕವನ್ನು ಎಲ್ಲರೂ ಓದುವುದರ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದರು.

ಮತ್ತೊಬ್ಬ ಹಿರಿಯ ವಕೀಲರಾದ ಶಾಸ್ತ್ರೀಯವರು ಮಾತನಾಡಿ ನಮ್ಮದು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಉದ್ದೇಶವಿಲ್ಲ ಆದರೆ ಸುಳ್ಳು ದೂರುಗಳನ್ನು ಸಲ್ಲಿಸುವುದರ ಮೂಲಕ ನ್ಯಾಯಾಲಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಉತ್ತಮ ನಡೆಯಲ್ಲ ಶೋಷಿತ ಸಮುದಾಯದವರು ಅಧಿಕಾರಕ್ಕೆ ಬಂದಾಗ ಉದ್ದೇಶಪೂರ್ವಕವಾಗಿ ಅವರ ಧೈರ್ಯವನ್ನು, ಚೈತನ್ಯವನ್ನು ಕುಗ್ಗಿಸುವ ಪ್ರಯತ್ನವನ್ನ ಮಾಡುತ್ತಿರುವಂತಹ ನಡೆ ಸರಿಯಾದದ್ದಲ್ಲ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಅಧಿಕಾರ ನಡೆಸುತ್ತಿರುವಂತಹ ಪ್ರಸ್ತುತ ಸರಕಾರಕ್ಕೆ ಈ ಪ್ರಕರಣ ಕಿರುಕುಳಕಾರಿಯಾಗಿ ಪರಿಗಣಿಸಿದೆ. ಅದಕ್ಕಾಗಿ ಮುಡಾ ಪ್ರಕರಣವನ್ನು ಅಧ್ಯಯನ ಮಾಡಿ ಹಿರಿಯ ನ್ಯಾಯವಾದಿಗಳು ಕರ್ನಾಟಕ ಜಾಗೃತ ವಕೀಲರ ವೇದಿಕೆಯ ಸದಸ್ಯರು ಪ್ರಕಟಪಡಿಸಿರುವ ಈ ಪುಸ್ತಕವನ್ನು ಎಲ್ಲರೂ ಓದುವುದರ ಮೂಲಕ ಜಾಗೃತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿಯ ಹಿರಿಯ ವಕೀಲರಾದ ಎನ್.ಆರ್. ಲಾತೂರ್, ಶಾಸ್ತ್ರಿ ಯವರು, ವಕೀಲರಾದ ನಿಂಗಪ್ಪ ಮಸ್ತಿ, ವಿನೋದ ಪಾಟೀಲ, ಗಂಗಾಧರ ಶೇಗುಣಸಿ ಹಾಗೂ ಇತರರು ಉಪಸ್ಥಿತರಿದ್ದರು.