ರಾಜಕೀಯ ಪಕ್ಷದ ಮತಗಟ್ಟೆ ಮಟ್ಟದ ಎಜೇಂಟರಿಗೆ ಎಸ್ಐಆರ್ ತರಬೇತಿ..
ಬೆಳಗಾವಿ : ಬುಧವಾರ ದಿನಾಂಕ 24/06/2026 ರಂದು ಸರ್ದಾರ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪಕ್ಷದ ಮತಗಟ್ಟೆ ಮಟ್ಟದ ಏಜೆಂಟರಿಗೆ ಹಾಗೂ ನಗರ ಸೇವಕರಿಗೆ ಎಸ್ಐಆರ್ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಹಾಗೂ ಉತ್ತರ ವಿಭಾಗದ ಸ.ಚುನಾವಣಾ ಅಧಿಕಾರಿಯಾದ ಉದಯಕುಮಾರ ಟಿ.ಬಿ. ಅವರು ತರಬೇತಿ ನೀಡಿದರು.
ಈ ವೇಳೆ ಮಾಜಿ ಶಾಸಕ ಅನೀಲ ಬೆನಕೆ, ಪಾಲಿಕೆಯ ಉಪಮೇಯರ
ಹಣಮಂತ ಕೊಂಗಾಲಿ, ಮುರುಘೇಂದ್ರಗೌಡ ಪಾಟೀಲ, ಪಾಲಿಕೆ ಪರಿಷತ್ ಕಾರ್ಯದರ್ಶಿ, ಉತ್ತರ ವಿಭಾಗದ ಚುನಾವಣಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಇತರರು ಇದ್ದಾರೆ.